ಉಲ್ಕಾ ವೃಷ್ಟಿ!!

ಉಲ್ಕಾ ವೃಷ್ಟಿ!!

ನಿರ್ಧಿಷ್ಟ ಪಥದಲ್ಲಿ ತಿರುಗುವ ಗ್ರಹಗಳ ನಡುವಿನ ಹಾದಿಯಲ್ಲಿ ಅಡ್ಡ ಬರುವ ಸಣ್ಣ ಬಂಡೆಗಳಂತಹ ಮಿಟಿಯೋರಾಯ್ಡ್ಸ್ ಭೂಮಿಯ ವಾಯುಮಂಡಲ ಪ್ರವೇಶಿಸಿದಾಗ ಗಾಳಿಯ ಜತೆ ಸಂಘರ್ಷಕ್ಕೊಳಗಾಗುತ್ತವೆ. ತಿಕ್ಕಾಟದಿಂದ ಇವು ಉರಿಯತೊಡಗುತ್ತವೆ. ಭೂಮಿಗೆ ಗುರುತ್ವಾಕರ್ಷಣೆ ಇರುವುದರಿಂದ ಭೂಮಿ ಎಡೆಗೆ ಧಾವಿಸಿ ಮಿಂಚುವ ನಕ್ಷತ್ರಗಳಂತೆ ಕಂಡು ಕರಗಿ ಹೋಗುತ್ತವೆ. ಉರಿದು ಬೀಳುವ ಈ ಸ್ಥಿತಿಯಲ್ಲಿ ಇವಕ್ಕೆ ‘ಮೀಟಿಯೋರ್ಸ್’ ಉಲ್ಕೆಗಳೆಂದು ಕರೆಯಲಾಗುತ್ತದೆ.

ಇಂಥಹ ಅಸಂಖ್ಯಾತ ಉಲ್ಕೆಗಳ ಪಾತ ದಿನವೂ ಆಕಾಶದಲ್ಲಿ ನಡೆಯುತ್ತಲೇ ಇರುತ್ತದೆ. ಬೀಳುವ ನಕ್ಷತ್ರ ಉಲ್ಕೆಯು ಸಾವುನೋವಿನಂತಹ ವಿಪ್ಲವ ತರುತ್ತದೆನ್ನುವುದು ಜನಸಾಮಾನ್ಯರ ನಂಬಿಕೆಯಾಗಿದೆ. ಪ್ರತಿ ಮೂವತ್ಮೂರು ವರ್ಷಗಳ ಅಂತರದಲ್ಲಿ ಉಲ್ಕಾಪಾತ ಗಣನೀಯವಾಗಿ ಹೆಚ್ಚುತ್ತದೆಂದು ಖಗೋಳ ವಿಜ್ಞಾನಿಗಳ ಅಭಿಮತ. ಗಂಟೆಗೆ ೫೦ ರಿಂದ ೧೦೦ ರ ತನಕ ನವೆಂಬರ್ ತಿಂಗಳ ೧೮ ರ ಬೆಳಗಿನ ಜಾವ ೨-೧ಂ ಗಂಟೆಗೆ ಶಿಖರ ತಲುಪುವ ಈ ನಕ್ಷತ್ರ ಮಳೆ ಬರಿಕಣ್ಣಿಗೆ ವಿಜ್ಞಾನಿಗಳಿಗೆ ಕಂಡಿತು. ಲಿಯೋನಿಡ್ ಮಿಟಿಯೋರಾಯ್ಡ್ಸ್‌ ಎಂದು ವಿಜ್ಞಾನಿಗಳು ಹೆಸರಿಸಿರುವ ಈ ಆಕಾಶಕಾಯಗಳು ‘ಟೆಂಪಲ್‌ಟಟ್ಸ್’ ಎನ್ನುವ ಧೂಮಕೇತು ಉಳಿಸಿ ಹೋದ ಧೂಳು ಕಸದಿಂದ ನಿರ್ಮಾಣವಾದವು. ಭೂಮಿಯ ಮೇಲ್ಮೈ ತಲುಪುವ ವೇಳೆಗಾಗಲೇ ಉಷ್ಣತೆ ಕಳೆದುಕೊಂಡು ಮತ್ತೆ ಬಂಡೆಗಳಂತಾದಾಗ ಉಲ್ಕೆಗಳನ್ನು ಮಿಟಿಯೋರೈಟ್ಸ್ ಎಂದು ಕರೆಯುತ್ತಾರೆ. ಲೋಹ ರಾಸಾಯನಿಕಗಳ ಕಲ್ಲು ಧೂಳುನಿಂದ ಕೂಡಿದ ಉಲ್ಕೆಗಳು ಜೀವ ಸೃಷ್ಟಿಗೆ ಬೇಕಾದ ಕಚ್ಚಾ ಪದಾರ್ಥಗಳನ್ನು ಒದಗಿಸಬಲ್ಲವು ಎನ್ನುತ್ತಾರೆ. ಖಗೋಳ ವಿಜ್ಞಾನಿಗಳು. ೩೬ ವರ್ಷಗಳಿಗೊಮ್ಮೆ ಪಾತಗೊಳ್ಳುವ ಈ ಉಲ್ಕೆಗಳ ದೃಷ್ಟಿಯಿಂದ ಇದುವರೆಗೆ ಅಪಾಯಗಳಾದ ವರದಿಗಳಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೋರುವ ತೂತು ಮುಚ್ಚ ಬೇಡವೇ ?
Next post ಏಕಿಷ್ಟು ದೂರ ಮಾಡಿದೆ ಎನ್ನ?

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys